Change View:     
ಅನಿವಾಸಿ ಕನ್ನಡಿಗ
(ಶನಿವಾರ 19 ಜನವರಿ 2013)     
ಕತಾರ್ : ಕತಾರ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಮತ್ತು ಕರ್ನಾಟಕ ರಾಜ್ಯ ನಡುವೆ ಸಾಂಸ್ಕೃತಿಕ ಮತ್ತು ವ್ಯವಹಾರ ಸಂಬಂಧಗಳಿಗೆ ಸೇತುವೆಯಂತೆ ಕಾರ್ಯ ನಿರ್ವಹಿಸುವ ವೇದಿಕೆಯೊಂದನ್ನು ರಚಿಸಲಾಗಿದ್ದು, ಈ ಮೂಲಕ ಕನ್ನಡಿಗರ ಬಹುದಿನಗಳ ಕನಸೊಂದು ನನಸಾದಂತಾಗಿದೆ.
(ಬುಧವಾರ 31 ಅಕ್ಟೋಬರ್ 2012)     
ದುಬೈ: ಕಲಾವಿದ ಶೋಧನ್ ಪ್ರಸಾದ್ ರವರು ನಿರ್ಮಿಸುತ್ತಿರುವ ಗಲ್ಫ್ ರಾಷ್ಟ್ರಗಳಲ್ಲಿ ಸಂಪೂರ್ಣವಾಗಿ ಚಿತ್ರೀಕರಣಗೊಳ್ಳಲಿರುವ ಪ್ರಥಮ ತುಳು ಚಿತ್ರ ಎಂಬ ಹೆಗ್ಗಳಿಕೆಯ ‘ನಿರೆಲ್’ಗೆ ಉದ್ಯಮಿ ಸರ್ವೋತ್ತಮ ಶೆಟ್ಟಿ ಚಾಲನೆ ನೀಡಿದರು.
(ಭಾನುವಾರ 28 ಅಕ್ಟೋಬರ್ 2012)     
ದುಬೈ: ದುಬೈಯಲ್ಲಿ ಇತ್ತೀಚಿಗೆ ಯು.ಎ.ಇ. ಬಂಟ್ಸ್ ಸಂಘದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಯು.ಎ.ಇ. ಯ ವಿವಿಧ ಭಾಗಗಳಿಂದ ಬಂಟ್ಸ್ ಸಮಾಜ ಬಾಂಧವರು ತಮ್ಮ ಬಂಧು ಮಿತ್ರರೊಂದಿಗೆ ಪಾಲ್ಗೊಂಡಿದ್ದರು. ಯು.ಎ.ಇ.ಯಲ್ಲಿರುವ ಎಲ್ಲಾ ಜಾತಿ ಸಮುದಾಯಗಳ ಸಂಘಟನೆಗಳ ಮುಖ್ಯಸ್ಥರು ಹಾಗೂ ಸದಸ್ಯರುಗಳು ಸೇರಿ ಸಾವಿರದ ಮುನ್ನೂರಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
(ಶನಿವಾರ 27 ಅಕ್ಟೋಬರ್ 2012)     
ಅಬುದಾಬಿ: ಕಳೆದ 26 ವರ್ಷಗಳಿಂದ ವೈವಿಧ್ಯಮಯ ಕನ್ನಡ ಕಾರ್ಯಕ್ರಮಗಳನ್ನು ನೀಡುತ್ತಾ ಯು.ಎ.ಇಯ ಕನ್ನಡಿಗರ ಸಂಘಟನೆಗಳಲ್ಲಿ ಮುಂಚೂಣಿಯ ಹೆಸರಾಗಿರುವ ಅಬುದಾಬಿ ಕರ್ನಾಟಕ ಸಂಘ ಕರ್ನಾಟಕ ರಾಜ್ಯೋತ್ಸವವನ್ನು ಇದೇ ಶುಕ್ರವಾರ, ನವೆಂಬರ್ 2ರಂದು ಅಬುದಾಬಿಯ ಇಂಡಿಯಾ ಸೋಶಲ್ & ಕಲ್ಚ್ ರಲ್ ಸೆಂಟರ್ ನಲ್ಲಿ ವಿಜ್ರಂಭಂಣೆಯಿಂದ ಆಚರಿಸಲಿದೆ.
(ಶುಕ್ರವಾರ 28 ಅಕ್ಟೋಬರ್ 2011)     
ಯೂರೋಪ್ ಕನ್ನಡಿಗರು ಸೇರಿಕೊಂಡು ಲಂಡನ್‌ನಲ್ಲಿ ಅಕ್ಟೋಬರ್ 22, 23ರಂದು ಎರಡು ದಿನಗಳ "ವಿಶ್ವ ಕನ್ನಡ ಸಮ್ಮೇಳನ ಯುರೋಪ್ 2011" ಆಯೋಜಿಸಿದ್ದು, ಹೊರ ನಾಡಿನ ಕನ್ನಡಿಗರು ಅಲ್ಲಿ ಕನ್ನಡದ ನುಡಿಯೊಂದಿಗೆ ಸಂಭ್ರಮಿಸಿದರು. ಇದರಲ್ಲಿ ಕನ್ನಡ ಚಿತ್ರರಂಗದ ಶ್ರೀನಾಥ್, ಅಂಬರೀಶ್, ಸುಮಲತಾ, ರಮ್ಯಾ, ದೊಡ್ಡರಂಗೇಗೌಡ, ಕರ್ನಾಟಕದ ರಾಜಕಾರಣಿಗಳಾದ ಡಿ.ಎಚ್.ಶಂಕರಮೂರ್ತಿ, ಡಿ.ಕೆ.ಶಿವಕುಮಾರ್, ನರೇಂದ್ರ ಸ್ವಾಮಿ ಮುಂತಾದವರು ಭಾಗವಹಿಸಿ, ಹೊರನಾಡ ಕನ್ನಡಿಗರಿಗೆ ಕನ್ನಡದ ನೆಲದ ಅನುಭವ ದೊರಕಿಸಿಕೊಟ್ಟರು.
Go to / 2 page(s) | ‹‹ Prev|Next ››