Change View:     
ಸಿನಿಮಾ ಮುನ್ನೋಟ
(ಭಾನುವಾರ 12 ಜನವರಿ 2014)     
ಚತುರ್ಭುಜ ಇದು ಸೂರ್ಯ ಸಿನಿಮಾಸ್ ಲಾಂಛನದಲ್ಲಿ ಸಿದ್ಧವಾಗಿರುವ ಚಿತ್ರ. ಎಂ.ಬಿ.ಶಿವನಂಜಪ್ಪ ನಿರ್ಮಾಣದಲ್ಲಿ ಈ ಸಿನಿಮಾ ಸಿದ್ಧವಾಗಿದ್ದು ಇದರ ಫಸ್ಟ್ ಕಾಪಿ ರೆಡಿ ಆಗಿದೆ. ಈ ಚಿತ್ರ ಸೆನ್ಸಾರ್ ಮುಂದೆ ಹೋಗಲಿದೆ. ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗಲಿದೆ. ಕಥೆ-ಚಿತ್ರಕಥೆ, ಸಂಭಾಷಣೆ, ನಿರ್ದೇಶನ-ಎಂ.ಎಂ. ಕೃಷ್ಣಲೇಖನ ಅವರೇ ಮಾಡಿರುವುದು. ಪೂರ್ಣಚಂದ್ರತೇಜಸ್ವಿ ಸಂಗೀತ, ಕಿರಣ್ ಹಂಪಾಪುರ ಛಾಯಾಗ್ರಹಣ, ಶ್ರೀಕಾಂತ್ ಅವರ ಸಂಕಲನ ಚಿತ್ರಕ್ಕಿದೆ.
(ಭಾನುವಾರ 12 ಜನವರಿ 2014)     
ಕನ್ನಡದ ಬಹು ನಿರೀಕ್ಷಿತ ಸಿನಿಮಾ ನಿನ್ನಿಂದಲೇ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟ ಅನೇಕ ದಾಖಲೆಗಳ ಬಗ್ಗೆ ನಾವು ತಿಳಿಸುತ್ತಾ ಬಂದಿದ್ದೇವೆ. ಈಗ ಈ ಸಿನಿಮಾ ೧೬ ನೆ ತಾರೀಖು ಬಿಡುಗಡೆ ಭಾಗ್ಯ ಕಾಣುತ್ತಿದೆ. ಕಳೆದ ವರ್ಷ ಒಂದು ಸಿನಿಮಾ ಬಿಡುಗಡೆ ಆಗಿರಲಿಲ್ಲ್ಲ ಅಪ್ಪುದು. ಅವರ ಅಭಿಮಾನಿಗಳಿಗೆ ಸುಗ್ಗಿ ನೀಡಲು ಅಪ್ಪು ಸುಗ್ಗಿ ಹಬ್ಬ ಸಂಕ್ರಾಂತಿಯ ಮಾರನೆಯ ದಿನ ನಿನ್ನಿಂದಲೇ ಚಿತ್ರದ ಮುಖಾಂತರ ತೆರೆಯ ಮೇಲೆ ಕಾಣ ಸಿಗುತ್ತಿದ್ದಾರೆ.
(ಭಾನುವಾರ 15 ಡಿಸೆಂಬರ್ 2013)     
ಪುನೀತ್ ರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ ನಿನ್ನಿಂದಲೇ. ಅದು ಈಗ ತನ್ನ ಚಿತ್ರೀಕರಣವನ್ನು ಯುಎಸ್ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಪೂರ್ಣ ಗೊಳಿಸಿದೆ. ಈ ಚಿತ್ರದಲ್ಲಿ ಅನೇಕ ಹೊಸ ಸಾಹಸಗಳನ್ನು ಪುನೀತ್ ರಾಜ್ ಕುಮಾರ್ ಮಾಡಿದ್ದಾರೆ. ನ್ಯೂಯಾರ್ಕ್ ಮತ್ತು ಥೈಲ್ಯಾಂಡ್ ನಲ್ಲಿ ಹೊಸ ಜಾಗಗಲ್ಲಿ ಚಿತ್ರವನ್ನು ಶೂಟ್ ಮಾಡಲಾಗಿದೆಯಂತೆ . ಈ ವರೆಗೂ ಆ ಲೋಕೇಶನ್ ಗಳಲ್ಲಿ ಯಾರೂ ಶೂಟಿಂಗ್ ಮಾಡಿಲ್ಲವಂತೆ. ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಆಗಿದ್ದಾರೆ ಎರಿಕ ಫರ್ನಾಂಡೀಸ್
(ಭಾನುವಾರ 15 ಡಿಸೆಂಬರ್ 2013)     
ಶತ್ರು ಮೂಲಕ ಆಕ್ಷನ್ ಸ್ಟಾರ್ ಆಗಲು ಹೊರಟಿದ್ದ ಲವ್ಲಿ ಸ್ಟಾರ್ ಪ್ರೇಂ ಮತ್ತೆ ತಮ್ಮ ಹಳೆ ನಟನೆ ಕಡೆಗೆ ಹಿಂತಿರುಗಿದ್ದಾರೆ. ಅವರ ಹೊಸ ಚಿತ್ರ ಮಸ್ತ್ ಮೊಹೋಬತ್ ನಲ್ಲಿ ಅವರು ಮತ್ತೆ ಚಾಕೋಲೆಟ್ ಹೀರೋ ಆಗಿ ಅವರ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಇತ್ತೀಚೆಗೆ ಚಿತ್ರ ಕಂಠೀರವ ಸ್ಟುಡಿಯೋ ದಲ್ಲಿ ಸೆಟ್ಟೇರಿತು. ಚಿತ್ರವನ್ನು ಮೋಹನ್ ಮಾಳಗಿ ನಿರ್ದೇಶಿಸುತ್ತಿದ್ದಾರೆ. ನಿರ್ಮಾಪಕರು ವಿ.ಕುಮಾರ್. ಚಿತ್ರದಲ್ಲಿ ವಂದನ ಗುಪ್ತ ಪ್ರೇಂ ಜೋಡಿಯಾಗಿದ್ದಾರೆ. ಜಯಂತ್ ಕಾಯ್ಕಿಣಿ ಮತ್ತು ಕವಿರಾಜ್ ಹಾಡುಗಳನ್ನು ಬರೆದಿದ್ದಾರೆ. ಸಂಗೀತ ನೀಡಿರುವವರು ಮನೋ ಮೂರ್ತಿ .ರಂಗಾಯಣ ರಘು, ಬುಲೆಟ್ ಪ್ರಕಾಶ್, ರಾಜು ತಾಳಿಕೋಟೆ ಮುಂತಾದ ಹಾಸ್ಯ ಕಲಾವಿದರ ದಂಡೆ ಚಿತ್ರದಲ್ಲಿದೆ .
(ಗುರುವಾರ 5 ಡಿಸೆಂಬರ್ 2013)     
ದುಡ್ಡೇ ದೊಡ್ಡಪ್ಪ ಅನ್ನುವುದು ವಾಡಿಕೆ ಮಾತು. ಸಿನಿಮಾದವರು ದುಡ್ಡು ಸುರಿದು ದುಡ್ಡು ಹೆಸರಿನ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಈಗ ಆ ಪರಂಪರೆಗೆ ದುಡ್ಡು ಮತ್ತು ಸಂಬಂಧ ಸೇರಿದೆ. ಚಿತ್ರ ಹೊಸಬರ ತಂಡದಲ್ಲಿ ನಿರ್ಮಾಣ ವಾಗುತ್ತಿದೆ. ಇದರಲ್ಲಿ ಹಿರಿಯ ಕಲಾವಿದ ಸುದರ್ಶನ್ ಮಾತ್ರ ತುಂಬಾ ಹಳೆ ನಟ. ಇವರು ಈ ಚಿತ್ರದಲ್ಲಿ ಕಾಮಿಡಿ ಕಿಲಾಡಿ ತಾತ ನಾಗಿ ಜನರ ಮುಂದೆ ಬರುತ್ತಿದ್ದಾರೆ. ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಹಿಂದಿಯಲ್ಲೂ ತಮ್ಮ ಖಳ ಅಭಿನಯ ತೋರಿದ್ದ ಸತ್ಯಜಿತ್ ಅವರ ಪುತ್ರ ಅಕ್ಷಯ್ ಈ ಚಿತ್ರ ಮೂಲಕ ಸಿನಿ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಿದ್ದಾರೆ. ಮೈಸೂರ್ ಕುಮಾರ್ ಇದರ ನಿರ್ಮಾಪಕರು. ಮಹದೇಶ್ವರ ಬೆಟ್ಟ ಮತ್ತು ಬನ್ನೇರು ಘಟ್ಟದಲ್ಲಿ ಚಿತ್ರೀಕರಣ ಮಾಡಿರುವ ಈ ಚಿತ್ರವನ್ನು ರಂಗಾಯಣ
Go to / 1572 page(s) | ‹‹ Prev|Next ››