Change View:     
ಟಿಪ್ಸ್‌
(ಶುಕ್ರವಾರ 24 ಜನವರಿ 2014)     
ಚಳಿಗಾಲದಲ್ಲಿ ತಂಪಾದ ವಾತಾವರಣವು ನೆಗಡಿ ಮತ್ತು ಕೆಮ್ಮು ಹೆಚ್ಚು ಮಾಡುತ್ತದೆ. ಅದರಿಂದ ದೂರವಾಗಲು ಕೆಲವು ಮನೆ ಮದ್ದು ಇಲ್ಲಿವೆ. ಅದನ್ನು ಉಪಯೋಗಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ ಅರಿಸಿಣದ ಕೊಂಬನ್ನು ಹುರಿದು ಪುಡಿ ಮಾಡಿ ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ದಿನದಲ್ಲಿ ಮೂರುಬಾರಿ ಸೇವಿಸಿ. ಕುದಿಯುವ ನೀರಿಗೆ ಅರಿಷಿಣ ಹಾಕಿ ಆವಿ ತೆಗೆದುಕೊಳ್ಳುವುದರಿಂದ ಕೆಮ್ಮು ಹಾಗೂ ಶೀತ ದೂರವಾಗುತ್ತದೆ.
(ಸೋಮವಾರ 6 ಜನವರಿ 2014)     
ಪ್ರತಿದಿನ ಮುಂಜಾನೆ ಮತ್ತು ಸಂಜೆ ತಪ್ಪದೆ ನೆನೆಸಿಟ್ಟ 4 ಬಾದಾಮಿಯನ್ನು ಸಿಪ್ಪೆ ತೆಗೆದು ಸೇವಿಸಿ. ಒಂದು ಲೋಟ ಹಾಲಿಗೆ ಅರ್ಧ ಚಮಚೆದಷ್ಟು ಬಾದಾಮಿ ಎಣ್ಣೆ ಸೇರಿಸಿ ಸೇವಿಸಿ. ಉತ್ತಮ ಜ್ಞಾಪಕ ಶಕ್ತಿ ನಿಮ್ಮದಾಗುತ್ತದೆ. ಆಹಾರದಲ್ಲಿ ತುಪ್ಪದಿಂದ ಮಾಡಿದ ಸಿಹಿಯನ್ನು ಬಳಸಿರಿ. ಅಲ್ಲದೆ ಹಸುವಿನ ಹಾಲು ಅದರಿಂದ ತಯಾರಾದ ತುಪ್ಪವನ್ನು ಬಳಸಿ. ಕಾರ ಹುಳಿ ಮತ್ತು ಮಸಾಲೆ ಪದಾರ್ಥಗಳ ಬಳಕೆ ಮಾಡದಿರಿ.
(ಶನಿವಾರ 10 ಮಾರ್ಚ್ 2012)     
ಅಧಿಕ ರಕ್ತದೊತ್ತಡ, ಹೃದ್ರೋಗ, ಕ್ಷಯ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗಾಗಿ ತಯಾರಿಸುವ ಔಷಧಗಳಿಗೆ ಬೆಳ್ಳುಳ್ಳಿ ಬೇಕೇ ಬೇಕು. ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಬಹು ಬೇಡಿಕೆಯುಳ್ಳದ್ದಾಗಿದೆ.
(ಮಂಗಳವಾರ 28 ಫೆಬ್ರವರಿ 2012)     
ಉಗುರು ದೇಹದ ಒಂದು ಭಾಗವಾಗಿರುವ ಕೆರಾಟಿನ್ ಎಂಬ ಪ್ರೋಟೀನ್‌ನಿಂದ ರಚಿತವಾಗಿವೆ. ದಿನದಲ್ಲಿ 0.01 ಸೆಂಟಿಮೀಟರ್‌ನಷ್ಟು ಬೆಳೆಯುತ್ತವೆ. ದೇಹದ ಇತರ ಭಾಗಗಳಿಗೆ ನಾವೆಷ್ಟು ಗಮನ ಕಾಳಜಿ ನೀಡುತ್ತೇವೆಯೋ, ಅದೇ ರೀತಿಯ ಕಾಳಜಿ ಮತ್ತು ಗಮನವನ್ನು ನಾವು ಉಗುರಿಗೆ ನೀಡುವುದು ಅವಶ್ಯಕ. ಉಗುರುಗಳು ಪ್ರತಿದಿನ ಬೆಳೆಯುವುದರಿಂದ ಅವುಗಳನ್ನು ನಿಯಮಿತವಾಗಿ ಶುಚಿಯಾಗಿಟ್ಟುಕೊಳ್ಳಬೇಕು ಹಾಗೂ ಸುಂದರ ಆಕಾರವನ್ನು ಅವಕ್ಕೆ ನೀಡಬೇಕು.
(ಬುಧವಾರ 8 ಫೆಬ್ರವರಿ 2012)     
ಚೆನ್ನೈ: ಆಪರೇಶನ್ ಹಾಗೂ ಹಲವು ತುರ್ತು ಸಂದರ್ಭಗಳಲ್ಲಿ ರಕ್ತಕ್ಕಾಗಿ ಪರದಾಡುವುದು ಸಾಮಾನ್ಯ. ಆದರೆ ಇದೀಗ ಅಗತ್ಯ ಬಿದ್ದಾಗ ರಕ್ತವನ್ನು ಪಡೆಯುವುದು ತುಂಬಾ ಸುಲಭವಾಗಿದೆ.
Go to / 47 page(s) | ‹‹ Prev|Next ››