Change View:     
ಲೇಖನಗಳು
(ಶನಿವಾರ 12 ಏಪ್ರಿಲ್ 2014)     
ಸದಾ ಕಾಲ ನೀವು ಇನ್ನೊಂದು 'ಲೈಕ್' ನಿರೀಕ್ಷೆಯಲ್ಲಿ ಫೇಸ್‌ಬುಕ್‌ಗೆ ಅಂಟಿಕೊಂಡಿರುತ್ತೀರಾ:? ಈ ಚಟವನ್ನು ನಿಲ್ಲಿಸುವುದು ಒಳ್ಳೆಯದು. ಏಕೆಂದರೆ ಇದರಿಂದ ಮಹಿಳೆಯರಲ್ಲಿ ನಕಾರಾತ್ಮಕ ಭಾವನೆಗಳು ಉಂಟಾಗಿ ನಂತರ ಆಹಾರ ಸೇವನೆ ಅವ್ಯವಸ್ಥೆಗಳು ಉಂಟಾಗುತ್ತವೆ. ಫೇಸ್‌ಬುಕ್‌ನಲ್ಲಿ ಕಳೆಯುವ ಸಮಯವನ್ನು ಕಳಪೆ ದೇಹದ ಚಿತ್ರಕ್ಕೆ ನಂಟು ಕಲ್ಪಿಸುವ ಮೊದಲ ಅಧ್ಯಯನದಲ್ಲಿ , ಫೇಸ್‌ಬುಕ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಹೆಚ್ಚು ನಕಾರಾತ್ಮಕ ಭಾವನೆಗಳು ಉದ್ಭವಿಸುತ್ತದೆ.
(ಸೋಮವಾರ 31 ಮಾರ್ಚ್ 2014)     
ಹೃದಯಬೇನೆಗಳು ಕಾಣಿಸಿಕೊಳ್ಳುವ ಅಪಾಯದಿಂದ ಮುಕ್ತರಾಗಲು ಮಹಿಳೆಯರು ಹೆಚ್ಚೆಚ್ಚು ಹಣ್ಣು , ತರಕಾರಿಗಳನ್ನು ತಿನ್ನಬೇಕು ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ. ಹಣ್ಣು, ತರಕಾರಿಯಂಥ ಆಹಾರ ಕಡಿಮೆ ಸೇವಿಸುವ ಮಹಿಳೆಯರಿಗೆ ಹೋಲಿಸಿದರೆ ಹೆಚ್ಚೆಚ್ಚು ಹಣ್ಣು, ತರಕಾರಿ ತಿನ್ನುವ ಮಹಿಳೆಯರಲ್ಲಿ 20 ವರ್ಷಗಳ ನಂತರ ಹೃದಯದ ರಕ್ತನಾಳಗಳಲ್ಲಿ ಲೋಳೆಯಂತಹ ನಿಕ್ಷೇಪದ ಶೇಖರಣೆ ಕಡಿಮೆಯಾಗುತ್ತದೆ. ಲೋಳೆಯಂಥ ನಿಕ್ಷೇಪ ಅಥವಾ ಕೊಬ್ಬಿನ ಶೇಖರಣೆಯಿಂದ ಹೃದಯಬೇನೆ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂಥ ಅಪಾಯ ಹೆಚ್ಚಿರುತ್ತದೆ.
(ಸೋಮವಾರ 3 ಮಾರ್ಚ್ 2014)     
ಬೇಸಿಗೆ ಬಂದೇ ಬಿಟ್ಟಿದೆ. ಸೂಕ್ಷ್ಮದೇಹ ಪ್ರವೃತ್ತಿಯವರು ಬಿಸಿಲಬೇಗೆಯನ್ನು ತಡಕೊಳ್ಳುವುದು ಕೊಂಚ ಕಷ್ಟ. ಬಿಸಿಲೂ ಕೆಲವೊಮ್ಮೆ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಮನುಷ್ಯನ ದೇಹದಲ್ಲಿ ಅಗತ್ಯಕ್ಕಿಂತ ನೀರಿನಂಶ ಕಡಿಮೆಯಾದಾಗ ದೇಹವು ಬಳಲಿ ನಿರ್ಜಲ(ಡಿಹೈಡ್ರೇಶನ್)ವಾಗುವುದು. ಅದರಲ್ಲೂ ಬೇಸಿಗೆಯಲ್ಲಿ ದೇಹದಿಂದ ಹೆಚ್ಚಿನ ಪ್ರಮಾಣದ ನೀರು ಬೆವರಿನ ಮೂಲಕ ಹರಿದು ಹೋಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ನೀರು ಅಥವಾ ದ್ರವ ಪದಾರ್ಥವನ್ನು ಸೇವಿಸಬೇಕು.
(ಸೋಮವಾರ 3 ಮಾರ್ಚ್ 2014)     
ಬೇಸಿಗೆ ಬಂತೆಂದರೆ ಉಷ್ಣ ಪ್ರಕೃತಿಯವರ ಪಾಡು ಹೇಳಿ ತೀರದು. ಸೂಕ್ಷ್ಮ ದೇಹ ಪ್ರಕೃತಿಯ ಇಂತಹವರಿಗೆ ಎಲ್ಲಾ ಹವಾಮಾನ ಬದಲಾವಣೆಗಳಲ್ಲೂ ಶಾರೀರಿಕ ಅಸ್ವಾಸ್ಥ್ಯ ಅನುಭವಿಸುತ್ತಾರೆ. ಇವರಿಗೆ ಸೊಪ್ಪು ಚಿಗುರೆಲೆಗಳ ಮೇಲೋಗರ ಸಾಂತ್ವನ ನೀಡುತ್ತದೆ. ವಿವಿಧ ಮರಗಳ ಚಿಗುರನ್ನು ಸಂಗ್ರಹಿಸಿ ನೀರು-ಚಟ್ನಿಯಾಗಿ ಅರೆದು ಬಳಸುವುದು ಬೇಸಗೆ ಕಾಲದಲ್ಲಿ ಆರೋಗ್ಯ ಸಂರಕ್ಷಣೆಗೆ ಉಪಯುಕ್ತ. ಪೇರಳೆ,ದಡಸೆ,ಮಾವು ಇತ್ಯಾದಿಗಳನ್ನು ತೆಂಗಿನ ತುರಿ, ಉಪ್ಪು ಇತ್ಯಾದಿಗಳನ್ನು ಸೇರಿಸಿ ಅರೆದು ತಯಾರಿಸುವ ಮೇಲೋಗರ ಅಧರಕ್ಕೂ ಉದರ್ಕೂ ಹಿತಕರವಾಗಿರುತ್ತದೆ.
(ಸೋಮವಾರ 24 ಮಾರ್ಚ್ 2014)     
ನ್ಯೂಯಾರ್ಕ್‌‌ : ಇಂದು ವಿಶ್ವ ಟಿಬಿ ದಿನವಾಗಿದೆ, ಇಡೀ ವಿಶ್ವ ಇಂದು ಈ ದಿನವನ್ನು ಆಚರಿಸುತ್ತಿದೆ ಮತ್ತು ಟಿಬಿಯಿಂದ ದೂರವಿರುವುದು ಹೇಗೆ ಮತ್ತು ಟಿಬಿ ಆದರೆ ಯಾವ ಚಿಕಿತ್ಸೆ ಪಡೆಯಬೇಕು ಎಂದು ವಿಶ್ವಾದ್ಯಂತ ಕಾರ್ಯಕ್ರಮಗಳು ನಡೆಯುತ್ತಿವೆ. 2011ರಿಂದ ಇಲ್ಲಿಯವರೇಗೆ ಮಕ್ಕಳಲ್ಲಿ ಕ್ಷಯರೋಗ ಎರಡು ಪಟ್ಟು ಹೆಚ್ಚಳ ಕಂಡಿದೆ ಎಂದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ಬೊಸ್ಟನ್‌‌ನಲ್ಲಿ ಬ್ರೀಧಮ್ ಆಂಡ್‌ ವುಮೆನ್ಸ್‌‌‌ ಹಾಸ್ಪಿಟಲ್‌‌‌ (ಬಿಡಬ್ಲ್ಯೂಎಚ್‌‌‌‌‌) ಮತ್ತು ಹಾರ್ವ್‌‌ರ್ಡ ಮೆಡಿಕಲ್‌ ಸ್ಕೂಲ್‌ ( ಹೆಚ್‌‌‌‌‌‌ಎಮ್‌‌ಎಸ್‌‌‌) ಸಂಶೋಧಕರಿಂದ ತಿಳಿದು ಬಂದ ವಿಷಯವೇನೇಂದರೆ, ಪ್ರತಿ ವರ್ಷ 10 ಲಕ್ಷ ಮಕ್ಕಳಿಗೆ ಕ್ಷಯರೋಗ ಬರುತ್ತದೆ ಎಂದು ತಿಳಿದು ಬಂದಿದೆ.
Go to / 59 page(s) | ‹‹ Prev|Next ››